ಮರಣ ಉಯಿಲು

ದಾರಿಯುದ್ದಕ್ಕೂ ಭರವಸೆಯ
ಕೋಲಹಿಡಿದು ಹೊರಟೆ
ಕನಸಿನಾ ಅರಮನೆ ಹುಡುಕಿ,
ಚಮಣಿಯಿಂದುರಿದಾ ಕಿರು
ಕಿಡಿಯೊಂದು ಕೇಕೆ ಹಾಕಿ:
ಮೆರೆಯುವುದೆಂಬ ಭ್ರಮೆ ಇರಲೇ ಇಲ್ಲ.

ಬಾಳ ಹಾದಿಯು ಹಾಗೆ ಸವೆಯುತಿದೆ
ಸುಮ್ಮನೆ,
ಆತ್ಮಜ್ಯೋತಿಯ ಬತ್ತಿ ಕರಗುತಿದೆ ಮೆಲ್ಲನೆ,
ಗೂಡಿನೊಳಗಿಂದ ಹಕ್ಕಿ ಇಣುಕುತಿದೆ ಚಾಚಿ
ಹಾರಿಹೋಗಲು ಮನಕೆ ಇಬ್ಬಗೆಯ ನೀತಿ:

ಸ್ವರ್ಗದಾ ಸನ್ನಿಧಿಗೋ, ನರಕದಾ ಸಂಧಿಗೋ
ಮೆಲಕು ಹಾಕುವ ನಡಿಗೆ ಶಾಶ್ವತದ ಕಡೆಗೆ
ನಕ್ಷತ್ರಗಳ ಹಾಡಿಯಲಿ
ನೇರ ನೆಗೆತದ ಬಯಕೆ
ಬೀದಿ ದೀಪದ ಆಸೆ ಬಿಟ್ಟ ಹಾತೆ
ಉರಿಯ ಉಯ್ಯಾಲೆ ಸುಡುಪಂಜು
ಬೆಂದರೂ ಬಯಕೆ
ಚಿತ್ತ ಚಾಂಚಲ್ಯ ಶೃಂಗಾರ ಸುಖಕೆ
ಕೊಂಡ ಹಾಯುತ್ತ ಕಾಲುಗಳ
ಹಳಹಳಿಕೆ

ನಸುಗೆಂಪು ಮಿದುತನ ಮರಳಿ ಪಾದಕ್ಕೆ
ನಶ್ವರವು ಬದುಕು
ಮತ್ತೆ ಶಾಶ್ವತದ ಬಯಕೆ,
ಕೂಲಿಗೂ ಕುಲೀನಗೂ
ಒಂದೇ ಉಯಿಲ ಹೊದಿಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುನ್ನುಡಿಕಾರ
Next post ಶಬರಿ – ೧

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys